Sunday, November 6, 2011

Kavana

                                                 ಬಾನಿಗೇ  ಸಿಡಿಲಬ್ಬರಿಸಿದನು

ಶತ: ಸಹೋದರರನು ಮೄತ್ಯು ನುಂಗಿತು
ಮುಕುಂದನ ಕಪಟವು ಮಿತ್ರನ ಕೊಂದಿತು
ಕಲಿಸಿದ ದ್ರೋಣ ಕೄಪರು ಕಣ್ಮುಚ್ಚಿದರು
ಭೀಶ್ಮನು ಬಾಸುಂಡೆಗಳೊಡನೆ ವಿಲಿನನಾದನು
ಸುಯೋಧನನು ದುರ್ಯೋಧನನಾದನು |

ವೈಷಂಪಾಯನವೆಂಬೀ ಶಾಂತ ಸರೋವರದೊಳ್
ಕೆಂಡದ ಕೆತ್ತನೆಯು ಪದ್ಮಾಸನದ ರೂಪತಾಳಿತು |
ಕಾಳಿಂಗಮರ್ದನನ ಮುಂದೆ
ಕಾಳಿಂಗ ಪತಾಕೆಯು ವಿಷ ಸೂಸುತಿತ್ತು |

ಮತ್ಸ್ಯಮಕರಮಾರ್ಜಾಲಗಳು
ಕುದಿಯುತಿಹ ಸರೋವರದೊಳ್ ಪಾಕವಾಗುತಿತ್ತು |
ಮಹಾಕಾಳಗದ ಕಠಿಣ ಗಾಯಗಳು
ನೀರೊಳಗೂ ಹೊಗೆ ಬೀರುತಿತ್ತು |

ದ್ರೌಪದಿಯ ಸೀರೆಯೊಳ್ ನೂರು ಸೋದರರ
ಸಾವು ಅಡಗಿತ್ತೇ |
ಐವರಜ್ನ್ಯಾತವಾಸವು ಐವತ್ತು ಸಹಸ್ರ
ಸೇನೆಯ ಮಣ್ಣುಮುಕ್ಕಿಸಿತೇ |

ಸೋದರರ ರಕ್ತ ಹಿಂಡಿದ ಅದೇ ಭೀಮನು
ಅವರೊಡನೆ ಆಡಿದ ಬಾಲ್ಯವನು ಮರೆತನೇ |
ಸೂತಪುತ್ರನನು ಸುಯೋಧನಮಿತ್ರನಾಗಿ
ಮಾಡಿದ ಪರಿಯನು ಮುಕುಂದನು ಮರೆತನೇ |

ದಾಯಾದಿತನವು ಒಲವಿನವರ
ಓರಗೆಯವರ ಬಲಿಪಡೆಯಿತು |
ನೂರೈವರ ಹಗೆತನವು
ಸಹಸ್ರರನು ಕೂಪದೊಳ್ ನೂಕಿತು |
ಧರ್ಮಯುದ್ಧವೆಂಬ ಹೆಸರ ಹೊತ್ತು
ಧರ್ಮೀಯರೆ ಅಸುನೀಗಿದರು |

ಇವಿತ್ಯಾದಿ ಆಲೋಚನೆಗಳನು ಹೊತ್ತ
ಸುಯೋಧನನ ಕಂಚಿನ ಹೃದಯ ಕೆಂಡವಾಯಿತು |
ಕ್ರೋಧವು ಹಲ್ಲುಗಳ ಮಧ್ಯೆ ಕಟಕಟಿಸಿತು
ಹೊರನಿಂತ ಭೀಮನ ಚೀತ್ಕಾರಗಳು ಹಿಯಾಳಿಕೆಗಳು
ಕಾದ ಸರೋವರವನು ಇನ್ನೂ ಕುದಿಸಿತು
ಒಳಗಿದ್ದ ಅಸ್ಸ್ಥಿರವಾದ ಆತ್ಮಕೆ ಆವೇಶವು ಹುಟ್ಟಿತು |

ಬಲರಾಮನಿಗಾಗಿ ಕಾಯುತಿದ್ದ ಕಳಿಂಗಪತಾಕನು
ತಾಳಲಾರದೆ ಸರೋವರದೊಳಿಂದ ಹೆಡೆಯೆತ್ತಿದನ್ |
ಮರಣಭಯವನು ಬಿಸುಡಿ
ಮರಣಸಿಂಹಾಸನವನು ಸಮೀಪಿಸಿದನು |
ಭೀಮನೇ ಶತ್ರುವೆಂದನು,
ಕ್ರೋಧವೇ ಅಖಾಡವೆಂದನು,
ಹಸ್ತವೇ ಆಯುಧವೆಂದನು...
ಬಾನಿಗೇ ಸಿಡಿಲಬ್ಬರಿಸಿದನು ||


                                                                           -Aಭಿ
                                                                            (ಸೂ: ಗಧಾಯುದ್ಧ ಪ್ರಸಂಗ, ಮಹಾಭಾರತ)

2 comments:

  1. abhabha!!hmmm prasangalu koodi kavana!!
    idu yellinda bantu ??

    ReplyDelete
  2. I always like to comment on the Gadhaayuddha prasanga, inspired from the great poet Ranna

    ReplyDelete

Trek Earth - Destinations